ಉಮಾ ಯಸ್ಯಾಂಕಸ್ಥಾ ಶಿರಸಿನಿಹಿತಾ ಸ್ವರ್ಗತಟಿನೀ
ಪ್ರಸನ್ನೇ ದ್ವೇ ನೇತ್ರೇ ತದಿತರದಹೋ ಕಾಮದಹನಮ್
ಗಲೇ ಯಸ್ಯಾಹಿರ್ಯೋ ಹಿಮನಗನಿಕೇತಃ ಶಶಿಧರಃ
ಸ ನೋ ಗಂಗಾಧಾರೀ ಭವತು ಶಿವಕಾರೀ ನತಿಕೃತಾಮ್ || ೧
ಉಡಿಯನೇರಿಹ ಮಡದಿ, ಜಟೆಗೆ ಹೊನ್ನೂರ ನದಿ
ಜೋಡಿ ಕಂಗಳು ಶಾಂತವಿನ್ನೊಂದು ರೌದ್ರ.
ಕೊರಳ ಹಾರವು ಹಾವು, ನೀರ್ಗಲ್ಲ ಬೆಟ್ಟ ಮನೆ
ಗಂಗೆ ತೊಟ್ಟವನೀತ ಕಾಯಲೆಮ್ಮ |
ಸ ದೇವೋ ಭೂತಾನಾಂ ಸಕಲಜಗದದ್ವೈತಪಯಸಾ
ಸಿಸಿಕ್ಷುಃ ಸಂಜಜ್ಞೇ ಮಹಿತತಮಪೂರ್ಣಾತಟಭುವಿ
ಮನೀಷೀ ಸರ್ವಜ್ಞಃ ಕವಿಹೃದಯಮುಗ್ಧಶ್ಚ ಮುನಿರಾಟ್
ಸ ನಃ ಶಂಕಾಹಾರೀ ಭವತು ಮತಿದಃ ಶಂಕರಗುರುಃ ||೨
ಎರಡಿಲ್ಲದರಿವ ರಸ ಜಗಕೆಲ್ಲ ಉಣಿಸಿದವ
ಪೂರ್ಣೆ ನದಿ ಬಯಲಲ್ಲಿ ತಳೆದು ತನುವ.
ತಿಳಿವಿನವ, ಬಲು ಜಾಣ,
ಕವಿಮನದ ಮುನಿರಾಜ
ಶಂಕೆ ಕಳೆ, ಮತಿಯ ಕೊಡು
ಶಂಕರಾರ್ಯ |
ಯಥಾ ಧಾವದ್ಗಂಗಾ ಹಿಮಗಿರಿಸೃತಾ ಪೋಷತಿ ಧರಾಂ
ತಥೈವೇಯಂ ಲೋಕಾನ್ ದ್ವಿತಯವಿಹತಾನ್ ಶಂಕರಕೃತಾ
ಸರಿದ್ಭೂತ್ವಾ ಸೋಂದಾಪುರವರಯತೇರಾಶ್ರಮಭುವಃ
ಸುಸಂವೃತ್ತಾ ಪುಷ್ಣಾತ್ಯವಿತಥಗತಿಃ ಸಾಧುಪದವೀ ||೩
ಬಿಳಿಗಿರಿಯ ಹಿಮವಿಳಿದು ಧರೆಯುಡಿಯ ಪೊರೆದಂತೆ
ಸೋದೆಯಂಗಳದಿಂದ ಅದ್ವೈತವಾಗಿ
ಒಳಿತಿಂಗೆ, ಬೆಳಕಿಂಗೆ,
ಇಬ್ಬಗೆಯ ಅಳಿವಿಂಗೆ
ಭವನ ಕೃಪೆ ಹರಿಯುತಿದೆ ಯತಿರೂಪದಿಮ್ ||
ಭವಾರಣ್ಯಕ್ರಾಂತೌ ನಿಹಿತಹೃದಯೋಽಪಿ ಶ್ರಮಸಹೋ
ಮಹಾರಣ್ಯಾರಕ್ಷಃ ಸರಿದವನದಕ್ಷಃ ಸ್ವಯಮಭೂತ್
ಮುಮುಕ್ಷುಸ್ಸನ್ನನ್ಯಾನ್ ವ್ಯಸನದಹನಾತ್ತಾರಣಪರಃ
ಸ ನಃ ಪಾಯಾನ್ನಿತ್ಯಂ ಮೃದುಹಸಿತಗಂಗಾಧರಯತಿಃ ||೪
ಭವದ ಕೇಡಿನ ಕಾಡ ತಾ ಮೀರ ಹೊರಟರೂ
ಸಿರಿ ಕಾನು, ತಿಳಿ ನೀರ ರಕ್ಷೆ
ಮರೆಯದವ
ಬಿಡುಗಡೆಗೆ ಹಂಬಲಿಸುವೆಲ್ಲರನು ಬಿಡಿಸುವವ
ತಿಳಿನಗೆಯ ಯತಿದೇವ ಕಾಯಲೆಮ್ಮ |
ಶಿವಾಕಾರೇ ಗ್ರಾಮೇ ವಿಮಲರುಚಿರಃ ಸೋಮನಿಲಯಃ
ಸಿತೇ ವೈಶಾಖೇಸ್ಮಿನ್ ವಿಧಿವದಭಿಷಿಕ್ತೋ ವಿಲಸತಿ |
ಯತೇಃ ಪುಣ್ಯಾಸ್ಥಿತ್ಯಾ ದ್ವಿಜಪಠಿತವೇದೈಶ್ಚ ಮುದಿತಃ
ಸ ನೋ ಗಂಗಾಧಾರೀ ಭವತು ಶಿವಕಾರೀ ನತಿಕೃತಾಮ್ ||೫
ಶುಕ್ಲವೈಶಾಖದಲಿ ಶಿವಕಾರನೂರಿನಲಿ
ಶಿವಶಿವೆಯರೊಗ್ಗೂಡಿ ಗುಡಿಯಾಯಿತೋ!
ಯತಿಶಿವಂಕರನಿಂದ, ವೇದಮಂತ್ರಗಳಿಂದ
ತಂಪಾಗಿ ಗಿರಿಯೊಡೆಯ ಕಾಯಲೆಮ್ಮ |