Saturday, May 20, 2017

ಸ ನಃ ಪಾಯಾನ್ನಿತ್ಯಮ್ - ತಿಳಿನಗೆಯ ಯತಿದೇವ ಕಾಯಲೆಮ್ಮ




ಉಮಾ ಯಸ್ಯಾಂಕಸ್ಥಾ ಶಿರಸಿನಿಹಿತಾ ಸ್ವರ್ಗತಟಿನೀ
ಪ್ರಸನ್ನೇ ದ್ವೇ ನೇತ್ರೇ ತದಿತರದಹೋ ಕಾಮದಹನಮ್
ಗಲೇ ಯಸ್ಯಾಹಿರ್ಯೋ ಹಿಮನಗನಿಕೇತಃ ಶಶಿಧರಃ
ನೋ ಗಂಗಾಧಾರೀ ಭವತು ಶಿವಕಾರೀ ನತಿಕೃತಾಮ್ || ೧

ಉಡಿಯನೇರಿಹ ಮಡದಿ, ಜಟೆಗೆ ಹೊನ್ನೂರ ನದಿ
ಜೋಡಿ ಕಂಗಳು ಶಾಂತವಿನ್ನೊಂದು ರೌದ್ರ.
ಕೊರಳ ಹಾರವು ಹಾವು, ನೀರ್ಗಲ್ಲ ಬೆಟ್ಟ ಮನೆ
ಗಂಗೆ ತೊಟ್ಟವನೀತ ಕಾಯಲೆಮ್ಮ |

ದೇವೋ ಭೂತಾನಾಂ ಸಕಲಜಗದದ್ವೈತಪಯಸಾ
ಸಿಸಿಕ್ಷುಃ ಸಂಜಜ್ಞೇ ಮಹಿತತಮಪೂರ್ಣಾತಟಭುವಿ 
ಮನೀಷೀ ಸರ್ವಜ್ಞಃ ಕವಿಹೃದಯಮುಗ್ಧಶ್ಚ ಮುನಿರಾಟ್ 
ಸ ನಃ ಶಂಕಾಹಾರೀ ಭವತು ಮತಿದಃ ಶಂಕರಗುರುಃ  ||೨

ಎರಡಿಲ್ಲದರಿವ ರಸ ಜಗಕೆಲ್ಲ ಉಣಿಸಿದವ
ಪೂರ್ಣೆ ನದಿ ಬಯಲಲ್ಲಿ ತಳೆದು ತನುವ.
ತಿಳಿವಿನವ, ಬಲು ಜಾಣ, ಕವಿಮನದ ಮುನಿರಾಜ
ಶಂಕೆ ಕಳೆ, ಮತಿಯ ಕೊಡು ಶಂಕರಾರ್ಯ |

ಯಥಾ ಧಾವದ್ಗಂಗಾ ಹಿಮಗಿರಿಸೃತಾ ಪೋಷತಿ ಧರಾಂ
ತಥೈವೇಯಂ ಲೋಕಾನ್ ದ್ವಿತಯವಿಹತಾನ್ ಶಂಕರಕೃತಾ
ಸರಿದ್ಭೂತ್ವಾ ಸೋಂದಾಪುರವರಯತೇರಾಶ್ರಮಭುವಃ  
ಸುಸಂವೃತ್ತಾ ಪುಷ್ಣಾತ್ಯವಿತಥಗತಿಃ ಸಾಧುಪದವೀ ||೩

ಬಿಳಿಗಿರಿಯ ಹಿಮವಿಳಿದು ಧರೆಯುಡಿಯ ಪೊರೆದಂತೆ
ಸೋದೆಯಂಗಳದಿಂದ ಅದ್ವೈತವಾಗಿ
ಒಳಿತಿಂಗೆ, ಬೆಳಕಿಂಗೆ, ಇಬ್ಬಗೆಯ ಅಳಿವಿಂಗೆ  
ಭವನ ಕೃಪೆ ಹರಿಯುತಿದೆ ಯತಿರೂಪದಿಮ್ || 


ಭವಾರಣ್ಯಕ್ರಾಂತೌ ನಿಹಿತಹೃದಯೋಽಪಿ ಶ್ರಮಸಹೋ      
ಮಹಾರಣ್ಯಾರಕ್ಷಃ ಸರಿದವನದಕ್ಷಃ ಸ್ವಯಮಭೂತ್
ಮುಮುಕ್ಷುಸ್ಸನ್ನನ್ಯಾನ್ ವ್ಯಸನದಹನಾತ್ತಾರಣಪರಃ
ಸ ನಃ ಪಾಯಾನ್ನಿತ್ಯಂ ಮೃದುಹಸಿತಗಂಗಾಧರಯತಿಃ ||೪

ಭವದ ಕೇಡಿನ ಕಾಡ ತಾ ಮೀರ ಹೊರಟರೂ
ಸಿರಿ ಕಾನು, ತಿಳಿ ನೀರ ರಕ್ಷೆ ಮರೆಯದವ 
ಬಿಡುಗಡೆಗೆ ಹಂಬಲಿಸುವೆಲ್ಲರನು ಬಿಡಿಸುವವ
ತಿಳಿನಗೆಯ ಯತಿದೇವ ಕಾಯಲೆಮ್ಮ |


ಶಿವಾಕಾರೇ ಗ್ರಾಮೇ ವಿಮಲರುಚಿರಃ ಸೋಮನಿಲಯಃ
ಸಿತೇ ವೈಶಾಖೇಸ್ಮಿನ್ ವಿಧಿವದಭಿಷಿಕ್ತೋ ವಿಲಸತಿ |
ಯತೇಃ ಪುಣ್ಯಾಸ್ಥಿತ್ಯಾ ದ್ವಿಜಪಠಿತವೇದೈಶ್ಚ ಮುದಿತಃ
ಸ ನೋ ಗಂಗಾಧಾರೀ ಭವತು ಶಿವಕಾರೀ ನತಿಕೃತಾಮ್ ||೫

ಶುಕ್ಲವೈಶಾಖದಲಿ ಶಿವಕಾರನೂರಿನಲಿ
ಶಿವಶಿವೆಯರೊಗ್ಗೂಡಿ ಗುಡಿಯಾಯಿತೋ!
ಯತಿಶಿವಂಕರನಿಂದ, ವೇದಮಂತ್ರಗಳಿಂದ
ತಂಪಾಗಿ ಗಿರಿಯೊಡೆಯ ಕಾಯಲೆಮ್ಮ |   





2 comments:

  1. ಸದ್ಗುರುರೂಪಿ ಪರಮಶಿವ ಒಳಿತನ್ನುಂಟುಮಾಡಲಿ.
    ಸುಂದರ, ಅರ್ಥಗರ್ಭಿತ ರಚನೆ.

    ReplyDelete
  2. ಅದ್ಭುತರಚನೆ. ಅಮೃತಭಾಷಾಲಹರಿಯ ಹರಿವು ಸದಾ ಇರಲಿ.

    ReplyDelete