Saturday, September 26, 2015


The contrasts between Charvakas and pseudo-intellectuals.

Sarva-Darshana-Sangraha’ an authoritative work attributed to Maadhavaacharya of 14th century A.D., is an orderly collection of sixteen different schools of thoughts of India. Even today, 700 years after the compilation, this book is leading the real seekers of knowledge to the right direction. It is a unique work of its kind, which impartially keeps the account of all the Darshanas of India, irrespective of one’s proof system (Pramana) and the one’s way of approaching the philosophical height.
Herein, the first Darshana ever put forth is ‘Charvaka Darshana’ according to which the human life is an accidental opportunity that has happened, and enjoyment of life is the only goal. These Charvakas are known as Lokayatas and they are well-known in the world of atheistic school, as well as among common public. Their arguments and expositions are not easily condemnable or hard to be eradicated, since this Darshan is aiming only on the worldly life.
Well, the word Charvaaka is fabricated out of two Sanskrit words- ‘chaaru’ which means ‘beautiful’ and ‘vaak’ which means ‘speech’. The outcome of combination of these two words is so clear; ‘He who speaks attractively, and beautifully, is Charvaka’. Perhaps the assertions of Charvakas are felt powerful and unfaultable because of the way they narrate and convince. People listened to them, since their perspective was worldlier and broadly experienced in daily life of common man. The society, especially the Indian society always been almost orthodox, and it was a hard challenge to drag them towards unorthodox Charvakism or materialism as such. However, only because of sweet and tactful logics, they could achieve some success.
Later came the Buddhism, which also is an unorthodox Darshana, and Buddhists opened a new channel in a broad manner, which really led to some phenomenal changes in both society and spiritual life of India. Buddhist arguments and well built logics were so capable of questioning the society of their time, and of shaking pre-established faith system. While Buddhism was almost all pervasive, the reformers (not the founders) of Astika Darshanas emerged and reestablished or propagated their system. In Sarva Darshaan Sangraha, finally comes the Adwaitha philosophy of Shankara, which is non-duality or singularity.
Here in the order also Maadhavaachaarya reveals the systematic evolution of individual’s ability to discuss, argue and to have a perfect perception of truth. Darshana- the Sanskrit word itself stands for the ‘vision’ and certainly it differs from person to person. No Darshana is shunned in Indian system, in contrast the unorthodox philosophy is also considered to be the Darshana- vision.
Let us have a look at present scenario of Karnataka, where people like Bhagavan- the self proclaimed descendants of Charvaka, Buddha, and such unorthodox scholars- are making social noise and provoking people to get agitated by their bigmouth and agnostic statements in the public. Though they quote Buddha as well as Charvaka, yet they are noisy and create filth unlike the scholars or Darshanikas whom they quote. Buddha was of a pleasant smile and peace, not of venomous words against particular community. Charvaka had a great kind of eloquence with sweet words, unlike Bhagavan- who is bigmouthed. Then, what actually these ‘pseudo intellectuals’ stand for?
While a society is so open in terms of constitution and in terms of religion, why should one make issues out of Darsahna which he/she believes in? If one has to change a philosophy and understanding of a society, then the path should be peaceful, academic, and purely logical. Here with Bhagavan what we find is lack of complete awareness of the topic which he condemns, and the lack of adherence to the thing what he asserts. In the whole philosophical system of India, debate was the means of posing questions and answering. Acharya Shankara is a best example here, who won over Buddhists, Karmathas and such others, by debating.
Instead of intellectual debate or churning, it seems Bhagavan is more interested in vomiting venom on Hindu community. Today the traditional intellectuals of Hindu society are very much ready for debate, but pseudo intellectuals like Bhagavan are quitting and refusing to participate. It shows the intellectual impotence of pseudo intellectuals.
The pathetic condition of Karnataka is- the very person is being awarded by Sahithya Academy, in spite of having negative opinion of majority public. This is indeed the most embarrassing moment for the literary world of Karnataka, and even for democracy.
Will the award after this much of chaos be blissful to Bhagavan?

Wednesday, September 23, 2015

ಚಿಂತನ ಪರಂಪರೆಯ ಅಪರೂಪದ ಉದಾಹರಣೆ



ಹಾಗೆ ನೋಡಿದರೆ ಇವತ್ತಿಗೂ ಬೆಟ್ಟದ ಮಧ್ಯೆ ಇರುವ, ಆಧುನಿಕತೆಯ ದುಪ್ಪಾಂಧೂಳು ದಾಳಿಗೆ ಒಳಗಾಗಿರದ, ರಾತ್ರಿ ಒಂಭತ್ತಕ್ಕೆಲ್ಲ ತನ್ನ ಮನೆಗಿರುವ ಎಲ್ಲ ಬಾಗಿಲುಗಳನ್ನೂ ಮುಚ್ಚಿಕೊಂಡು ತಂಣಗೆ ನಿದ್ರೆ ಮಾಡಿಬಿಡುವ, ದೇಗುಲ ಪಟ್ಟಣ ಶೃಂಗೇರಿ. ಯಾವುದೇ ದಿಕ್ಕಿನಿಂದ ಅಲ್ಲಿಗೆ ತಲುಪುವುದೂ, ಅಲ್ಲಿಂದ ಇನ್ನೆಲ್ಲಿಗಾದರೂ ಹೊರಡುವುದು ೨೧ನೇ ಶತಮಾನದ ಇವತ್ತಿನ ಸ್ಥಿತಿಯಲ್ಲೂ ಶ್ರಮದಾಯಕ. ಶಾರದೆಯ ಪೀಠವೊಂದನ್ನುಳಿದು ಇನ್ಯಾವ ಕಾರಣಕ್ಕೂ ದೂರ ದೂರದವರು ಬಂದು ಹೋಗಬೇಕಾದ ಜಾಗವೇ ಅದಲ್ಲ. ದೇವಾಲಯವಿದೆ, ಹಾಗಾಗಿ ಜನ ಬರುತ್ತಾರೆ, ಅದೊಂದು ಶಾಂಕರ ಪೀಠ, ಅದೇ ಕಾರಣಕ್ಕೆ ಅದು ಭಾರತದ ಜನತೆಗೆ ಪರಿಚಯವಿದೆ. ಇಷ್ಟೇ ಆದರೆ ಇಷ್ಟಕ್ಕೇ ಮುಗಿಯಬೇಕಿತ್ತು, ಆದರೆ ನಾನು ನಿನ್ನೆಯಿಂದ ಶೃಂಗೇರಿಯ ನೆನಪು ಮಾಡಿಕೊಳ್ಳುತ್ತಿರುವುದಕ್ಕೆ ಸಾಂದರ್ಭಿಕವಾದ ಮಹತ್ತರ ಕಾರಣ ಇನ್ನೊಂದಿದೆ.

ಚಿಂತನೆ ಮತ್ತು ವಿಮರ್ಶೆಯ ಪರಂಪರೆಗೆ ಸಂಬಂಧಿಸಿದ ಸಂಗತಿ ಅದು. ಭಾದ್ರಪದ ಮಾಸದ ಶುಕ್ಲಪಕ್ಷವಲ್ಲವೇ ನಡೆಯುತ್ತಿರುವುದು? ಇದೇ ಹೊತ್ತಿನಲ್ಲಿ ಶೃಂಗೇರಿಯ ಜಗದ್ಗುರು ಪೀಠದ ಎದುರಿನಲ್ಲಿ ಚಿಂತನೆಯ ಸತ್ರವೊಂದು ಪ್ರತಿವರ್ಷ ನಡೆಯುತ್ತದೆ. ದರ್ಶನಗಳು ಮತ್ತು ವ್ಯಾಕರಣ ವಿಷಯಗಳಲ್ಲಿ ದಿನವೂ ಮೂರ್ ನಾಲ್ಕು ಗಂಟೆ ನಡೆಯುವ ವಾಕ್ಯಾರ್ಥ ಸಭೆ ಅದು. ಗಣೇಶನ ಎದುರಲ್ಲಿ ಜಗದ್ಗುರುಗಳ ಸಮ್ಮುಖದಲ್ಲಿ ನಡೆಯುವ ಈ ಸಭೆ, ಗಣಪತಿ ವಾಕ್ಯಾರ್ಥ ಸಭೆ ಎಂದೇ ವಿದಿತ. ಭಾರತದ ಯಾವುದೇ ಭಾಗದ ಸಂಸ್ಕೃತ ಪರಂಪರಾಗತ ವಿದ್ವಾಂಸನಿರಲಿ, ಈ ಸಭೆಯ ಹೆಸರು ಕೇಳಿದರೆ ಅದೊಂದು ಬಗೆಯ ವಿದ್ವತ್ ಕಂಪವನ್ನೂ, ವಿದ್ಯುತ್ಕಂಪವನ್ನೂ ಅನುಭವಿಸುತ್ತಾನೆ! ಇಲ್ಲಿ ಪಾಲ್ಗೊಳ್ಳಲೆಂದೇ ಭಾರತದ ಬೇರೆ ಬೇರೆ ಭಾಗದಿಂದ ವಿದ್ವಾಂಸರು ಬರುತ್ತಾರೆ.

ಬಂದವನ ಮಾತೃಭಾಷೆ ಯಾವುದೇ ಇರಲಿ, ಸಭೆಯ ಪರಿಮಿತಿಯಲ್ಲಿ ಚರ್ಚೆಯೂ ಸಂವಹನವೂ ನಡೆಯುವುದೆಲ್ಲ ಸಂಸ್ಕೃತದಲ್ಲಿಯೇ. ಸಂಸ್ಕೃತ ಪಂಡಿತರ ಸಭೆ ಎಂದರೆ ಅಲ್ಲಿರುವವರೆಲ್ಲ ವೃದ್ಧರೇ ಎಂದೇನಿಲ್ಲ, ತುಂಬಾ ಯುವ ವಯೋಮಾನದವರೂ ವಿದ್ವಜ್ಜನರ ಮಧ್ಯೆ ಕಾಣಸಿಗುತ್ತಾರೆ.

ಎಪ್ಪತ್ತೈದರಿಂದ ನೂರರಷ್ಟಿರುವ ವಿದ್ವಾಂಸರ ಸಭೆಯಲ್ಲಿ ಸಿಂಹದಂತೆ ಜಗದ್ಗುರುಗಳು ಅಧ್ಯಕ್ಷರಾಗಿ ಕುಳಿತಿದ್ದರೆ ಎಂಥಾ ವಿದ್ವಾಂಸನೂ ಬಾಯ್ಬಿಡುವುದಕ್ಕೆ ಮುಂಚೆ ಮೂರು ಸಲ ಯೋಚನೆ ಮಾಡುತ್ತಾನೆ. ಒಂದು ಪುಟ್ಟ ಪದಸ್ಖಲನ್ಮವೂ ಅಲ್ಲಿನ ಎಲ್ಲರಿಗೂ ತಿಳಿಯುತ್ತದೆ. ಅಪದ್ಧ ವಾಕ್ಯವನ್ನು ಪ್ರಯೋಗಿಸುವುದಂತಿರಲಿ, ಒಂದೇ ಒಂದು ಪದವನ್ನೂ ತಪ್ಪಾಡದ ಸಿದ್ಧಿಯೊಂದು ಇರುವವ ಮಾತ್ರ ಆ ಸಭೆಯಲ್ಲಿ ಮಾತಾಡಬಲ್ಲ. ಪರಂಪರಾಗತ ಸಂಸ್ಕೃತ ವಿದ್ಯಾರ್ಥಿಗೆ ಗಣಪತಿ ವಾಕ್ಯಾರ್ಥ ಸಭೆಯಲ್ಲಿ ಸಂಚಲಚ್ಛಾರದೆಯ ಎದುರು ಶಾಸ್ತ್ರ ಚರ್ಚೆ ಮಾಡುವುದು ಒಂದು ಬಲುದೊಡ್ಡ ಕನಸು. ಕೆಲವರಿಗೆ ಮಾತ್ರ ಒಲಿಯಬಹುದಾದ ಕನಸು. ಸುಮ್ಮನೆ ಶಾಸ್ತ್ರ ಓದಿದ ಮಾತ್ರಕ್ಕೆ ಅಲ್ಲಿ ಮಾತಾಡುವ ಅರ್ಹತೆ ಯಾರಿಗೂ ಬಾರದು. ಅದಕ್ಕೆಂದೇ ಇರುವ, ಜಗದ್ಗುರುಗಳೇ ನಿರ್ವಹಿಸುವ ಪರೀಕ್ಷೆಯಲ್ಲಿ ಸೈ ಎನಿಸಿಕೊಂಡವನಿಗೆ ಆ ಭಾಗ್ಯ ಒಲಿಯುತ್ತದೆ. ಪರೀಕ್ಷೆ ಎಂದರೇನೆಂದು ಅಂಥಾ ಪರೀಕ್ಷೆಯಲ್ಲಿ ಉತ್ತರಿಸಿ ಬಂದವ ಹೇಳಬೇಕು- ಹಾಗಿರುತ್ತದೆ ಅದು. ಇಲ್ಲಿ ಮಂಡನೆಯಾಗುವ ಯಾವುದೇ ವಿಷಯದ ಮೇಲೆ ಅಲ್ಲಿರುವ ಯಾರೂ ಪ್ರಶ್ನೆ ಕೇಳಬಹುದು, ಜಗದ್ಗುರುಗಳೇ ಸ್ವತಃ ಪ್ರಶ್ನಿಸಬಹುದು. ಪ್ರಸ್ತುತಿ ಮಾಡುವವನಿಗೆ ಉತ್ತರಿಸುವ ಅಳವು ಇರಬೇಕಾಗುತ್ತದೆ. ಪ್ರಶ್ನೆ ಕೇಳುವುದೊಂದೆ ಅಲ್ಲ, ತಮಗೆ ಹೊಸ ವಿಷಯ ಎಂದು ಯಾವುದಾದರೂ ಕಂಡರೆ ಜಗದ್ಗುರುಗಳು ಆಸಕ್ತಿಯಿಂದ ಕೇಳಿ ತಿಳಿದುಕೊಳ್ಳುತ್ತಾರೆ. ಒಂದೇ ಶಾಸ್ತ್ರದಮೇಲೆ ಹಿಡಿತ ಸಾಧಿಸುವುದಕ್ಕೇ ಜೀವಮಾನ ಪರ್ಯಂತ ಸಾಧನೆ ಬೇಕಿರುವಾಗ, ಜಗದ್ಗುರುಗಳು ಅಲ್ಲಿ ನಡೆಯುವ ಅಷ್ಟೂ ಶಾಸ್ತ್ರಗಳಲ್ಲಿ ತಮ್ಮ ತಿಳಿವಿನ ಆಳವನ್ನು ತೆರೆದಿಡುವುದನ್ನು ನೋಡುವುದೇ ಒಂದು ವಿಸ್ಮಯ.

ಚರ್ಚೆ, ಚಿಂತನೆ ಅಂದರೇನೆಂದು ತಿಳಿಯಲು ಅದೊಂದು ಅತ್ಯುತ್ತಮ ಸಭೆ. ಸಂಸ್ಕೃತ ವಿದ್ವಾಂಸರ ಸಭೆಯೆಂದರೆ ಕರ್ಮಠರ, ಬ್ರಾಹ್ಮಣರ, ಕೆಲವೇ ಜನರಿಗೆ ಪ್ರವೇಶವಿರುವ ಸಭೆಯೆಂದು ಕೆಲವರು ಭಾವಿಸಿರಬಹುದು. ವಿದ್ವತ್ತೆಯಿರುವ, ಆಸ್ಥೆ ಮತ್ತು ಆಸಕ್ತಿಯಿರುವ ಸ್ತ್ರೀಯರೂ ಬ್ರಾಹ್ಮಣೇತರರೂ ಸಭೆಯಲ್ಲಿರುತ್ತಾರೆ.
ಅಷ್ಟು ದಿನಗಳ ಸತ್ರದ ಕೊನೆಯಲ್ಲಿ ಸ್ವತಃ ಜಗದ್ಗುರುಗಳು ಪ್ರತಿಯೊಂದು ಶಾಸ್ತ್ರದಿಂದ ಉತ್ತಮ ಪ್ರಸ್ತುತಿಯುಳ್ಳ ಒಬ್ಬೊಬ್ಬ ವಿದ್ವಾಂಸರಿಗೆ ಮುದ್ರೆಯ ಬಂಗಾರದುಂಗುರವನ್ನಿತ್ತು ಆಶೀರ್ವದಿಸುತ್ತಾರೆ. ಸಂಸ್ಕೃತ ವಿದ್ವದ್ವಲಯದಲ್ಲಿ ಆ ಉಂಗುರಕ್ಕಿರುವ ಬೆಲೆಯನ್ನು ಅಳೆಯಲೇ ಆಗದು. ಶಾರದೆಯ ಮನೆಯಲ್ಲಿ ಇವನೊಬ್ಬ ವಿದ್ವಾಂಸನೆಂದು ಪ್ರಮಾಣಿತವಾದಂತೆ ಅದು! ಒಬ್ಬ ವಿದ್ವಾಂಸನ ಜೀವಮಾನದ ಸಾಧನೆ ಅದಾಗಿರುತ್ತದೆ.

ಸುಮ್ಮನೆ ಒಂದು ಕಲ್ಪನೆ ತಂದು ಕೊಳ್ಳುವುದಾದರೆ ಯೂಟ್ಯೂಬ್ ಕೊಂಡಿ ಇಲ್ಲಿದೆ .

ಅಂದಹಾಗೆ, ನಿನ್ನೆ ಕನ್ನಡದ ಕೆಲವು ವಿದ್ವಾಂಸರು ಚರ್ಚೆಯಲ್ಲಿ ಭಾಗವಹಿಸಿದ್ದನ್ನು ಕಂಡು ಇವತ್ತಿದನ್ನು ಬರೆಯುವ ಒತ್ತಡ ನನ್ನಲ್ಲಿ ಮೂಡಿತು. ಚರ್ಚೆಯ ರೀತಿಯನ್ನುಅರಿಯುವ ಮನಸಿದ್ದರೆ, ಒಮ್ಮೆ ಈ ಸಭೆಯೆದುರು ನಿಂತು ಬರಲಿ ಈ ಜನ. ಹಾಂ, ತಮ್ಮನ್ನು ಒಳಗೆ ಬಿಡಲಾರರೆಂಬ ರಾಗ ಎಲ್ಲ ಬೇಡ. ಸಾಂಪ್ರದಾಯಿಕ ಉಡುಗೆಯಲ್ಲಿ ತಾವು ಕುಳಿತೆದ್ದು ಬರಬಹುದು. ಸುಮ್ಮನೆ ಅಲಾಳ್ ಟೋಪಿಯಂತೆ, ಬುದ್ಧಿ ಜೀವಿಯಂತೆ, ಜೋಳಿಗೆ ಪಾಯಿಜಾಮ ಹಾಕಿ ಹೋದರೆ ಅಲ್ಲಿದ್ದವರೆಲ್ಲರೂ ಮೇಲಿಂದ ಕೆಳಗೆ ನಿಮ್ಮನ್ನೇ ನೋಡುತ್ತಾರೆ, ತಪ್ಪು ನಿಮ್ಮದೇ ಹೊರತು ಅವರದಲ್ಲ. ತಮ್ಮ ವಿವಿಗಳಲ್ಲಿ ಶಾಲು ಪಂಚೆ ಹೊದ್ದು ಒಬ್ಬ ವಿದ್ಯಾರ್ಥಿ ಬಂದರೆ ನೀವು ನೋಡುವುದಿಲ್ಲವೇ? ಹಾಗೆ.    ಹೇಗೂ ತಮ್ಮಲ್ಲಿ ಕೆಲವರಿಗೆ ಸಂಸ್ಕೃತದಲ್ಲಿ ಪಾಂಡಿತ್ಯ ಇರುವುದರಿಂದ ಚರ್ಚೆ ಅರ್ಥವಾಗದೇ ಇರಲಾರದು. ಇನ್ನೊಂದು ಮೂರ್ನಾಕು ದಿನ ಇರಬಹುದು, ನೋಡಿ, ಪ್ರಯತ್ನ ಮಾಡಿ.   




Tuesday, September 22, 2015


ಇಂದು ಕಂಡ ಕನ್ನಡದ ಬೌದ್ಧಿಕ ಬಡತನದ ಬಗ್ಗೆ ಖಿನ್ನನಾಗಿ...

ನನಗೆ ಈ ಜನಗಳ ಬಗ್ಗೆ ಪೂರ್ವಗ್ರಹೀತಗಳಿರಲಲ್ಲ. ಆದರೆ, ಇದೀಗ ಪ್ರಜಾ ಟೀವಿಯಲ್ಲಿ ಬಂದ ಭಗವಾನ್ ಅವಾಂತರದ ಕುರಿತಾದ ಚರ್ಚೆಯನ್ನು ಗಮನಿಸುತ್ತ ಬಿ ಟಿ ಲಲಿತಾ ನಾಯಕ್, ಯೋಗೇಶ್ ಮಾಸ್ಟರ್, ಅರವಿಂದ ಮಾಲಗತ್ತಿ ಎಂಬ ಕನ್ನಡದ ಸಾಹಿತಿಗಳ ಚರ್ಚಾ ಸಾಮರ್ಥ್ಯ ಮತ್ತು ವಿಚಾರ ಸಾಮರ್ಥ್ಯದ ಬಗ್ಗೆ ಒಳ್ಳೆಯ ಅಭಿಪ್ರಾಯವಂತೂ ಮೂಡಿಲ್ಲ.

ಚರ್ಚೆಯಲ್ಲಿ ಭಾಗವಹಿಸಿದ ಉಳಿದಿಬ್ಬರು ಯುವಕರ ಬಗ್ಗೆ ನಾನು ಮಾತಾಡಬೇಕಿಲ್ಲ, ಯಾಕೆಂದರೆ ಅವರ್ಯಾರೂ ಸಾಹಿತ್ಯದ ಕಾರಣಕ್ಕೆ ಗುರುತಿಸಿಕೊಂಡವರಲ್ಲ. ಸಾಹಿತ್ಯದ ದನಿಯಾಗಿ ನಿಂತವರೂ ಅಲ್ಲ. ಅವರು ಜನ ಸಾಮಾನ್ಯರ ಪ್ರತಿನಿಧಿಗಳು.

ಕನ್ನಡ ಸಾಹಿತ್ಯದ ಪಂಥಗಳ ನಡುವಿನ ಅಧ್ವಾನ ಏನೇ ಇರಲಿ, ತಮ್ಮ ತಮ್ಮ ವಿಚಾರಗಳನ್ನು ಆಯಾ ಪಂಥದ ಅನುಗಾಮಿಗಳು ಸಮರ್ಥವಾಗಿಯೂ, ತಾರ್ಕಿಕವಾಗಿಯೂ, ಪ್ರತಿಪಾದಿಸಬಲ್ಲರು ಎಂಬುದೇ ನನ್ನ ನಂಬುಗೆಯಾಗಿತ್ತು. ಆ ನನ್ನ ನಂಬುಗೆಯನ್ನು ಮೊದಲಬಾರಿಗೆ ಹುಸಿಯಾಗಿಸಿದ್ದು ಮುಖ್ಯಮಂತ್ರಿಗಳ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು ಅವರು. ಹೋಗಲಿ, ಅವರು ಅಂಕಣಕಾರ, ಪತ್ರಕಾರ, ಆದರೆ ಸಾಹಿತಿಯಲ್ಲ ಎಂದು ಸಮಾಧಾನ ಮಾಡಿಕೊಂಡಿದ್ದೆ. ಇವತ್ತು ಪ್ರಜಾಟೀವಿಯ ಚರ್ಚೆಯಲ್ಲಿ ಬಂದು ಕುಳಿತವರು ಸಾಹಿತಿಗಳಾಗಿದ್ದರು, ಅಧ್ಯಯನ ಇದ್ದು ಜೀವನ ಪರ್ಯಂತ ಸಾಹಿತ್ಯದ ನಿರ್ಮಿತಿಯಲ್ಲೇ ತೊಡಗಿದವರು. ಹಾಗಾಗಿ ಕನ್ನಡದ ಚಿಂತನೆಯ ಮೇಲಿನ ನನ್ನ ಕಕ್ಕುಲಾತಿ ಈ ಜನಗಳಿಂದ ಸಮರ್ಥವಾದ, ತರ್ಕಸಮ್ಮತವಾದ, ಮಾತುಗಳನ್ನು ನಿರೀಕ್ಷಿಸುತ್ತಿತ್ತು. ಆದರೆ ಆಗಿದ್ದು ಮಾತ್ರ ಶುದ್ಧ ನಿರಾಸೆ.

ಕುವೆಂಪು ’ಎಲ್ಲ ದೇವರನು ನೂಕಾಚೆ ದೂರ’ ಎಂದು ಬರೆದದ್ದನ್ನೂ ಇವತ್ತಿನ ಭಗವಾನನ ಅಪಕ್ವ ಮಾತುಗಳನ್ನೂ ಸಮವೆಂಬಂತೆ ನೋಡುವುದಕ್ಕೆ ಹೇಳುವ ಬಿ ಟಿ ಲಲಿತಾ ನಾಯಕ್, ಇಸ್ಲಾಮೀ ಭಯೋತ್ಪಾದನೆಯ ವಿರುದ್ಧವಾಗಿ ಭಗವಾನ್ ಮತ್ತು ತಮ್ಮಂಥವರೆಲ್ಲ  ಮಾತಾಡಿದ್ದೇವೆ ಎಂದು ಸುಳ್ಳೇ ಹೇಳಿದ ಮಾಸ್ಟರ್, ಭಗವಾನ್ ವೈಜ್ಞಾನಿಕವಾಗಿ ಮಾತಾಡುತ್ತಾರೆ, ಬರೆಯುತ್ತಾರೆ ಎಂಬಂತೆ ಮಾತಾಡಿದ ಮಾಲಗತ್ತಿ- ಕನ್ನಡದಲ್ಲಿ ಚರ್ಚೆಯನ್ನು ಮಾಡುವ, ವಾದ ಮಂಡಿಸುವ, ಖಂಡಿಸುವ ಬೌದ್ಧಿಕ ಪರಂಪರೆ ಹೀನಾಯ ರೀತಿಯಲ್ಲಿ ಸೊರಗಿದೆ ಎಂಬುದನ್ನು ಜಾಹೀರು ಮಾಡಿದರು. ಇದೆಲ್ಲ ಕೆಲವು ಉದಾಹರಣೆಯಷ್ಟೇ, ಅಲ್ಲಿ ನಡೆದ ಹಲವಾರು ವಾದಗಳು ವಿತಂಡಾ ಮತ್ತು ಜಲ್ಪ (ಹಲುಬುವಿಕೆ) ಎಂಬ ಎಲುಬಿಲ್ಲದ ತರ್ಕದಲ್ಲಿ ಬರುತ್ತವೆ. ಬಲ ಎಡಗಳ ಹಂಗಿಲ್ಲದ ಒಬ್ಬ ಸಾಮಾನ್ಯನಾಗಿ ಹೇಳುತ್ತೇನೆ, ಕಾರ್ಯಕ್ರಮದ ನಿರೂಪಕರು ಅಲ್ಲಿ ಚಿಂತಕರ ಹೆಸರಲ್ಲಿ ಕುಳಿತ ಮತ್ತು ಫೋನಿಗೆ ಸಿಕ್ಕ ಸಾಹಿತಿಗಳಿಗಿಂತ ತರ್ಕಸಾಧುವಾಗಿದ್ದರು.

ಕನ್ನಡದಲ್ಲಿ ಚಿಂತನೆ, ಚಿಂತನೆಯ ಮಂಡನೆ- ಖಂಡನೆಗಳ ಪರಂಪರೆ ಇತ್ತೆಂದು ನಾನು ಬಲ್ಲೆ, ಇಂದಿಗೂ ನನ್ನ ಹಲವಾರು ಮಿತ್ರರಲ್ಲಿ, ಹಿರಿಯರಲ್ಲಿ ನಾನು ಅದನ್ನು ಕಾಣುತ್ತೇನೆ. ದುರದೃಷ್ಟವಶಾತ್ ಈ ಸಾಹಿತಿಗಳಲ್ಲಿ ನಾನದನ್ನು ನಿರೀಕ್ಷಿಸಿದ್ದೆ. ಇವತ್ತು ಅದೆಷ್ಟು ನಿರಾಸೆಯಾಯ್ತೆಂದು ವಿವರಿಸಲಾರೆ. ಒಬ್ಬ ಸಂಸ್ಕೃತದ ವಿದ್ಯಾರ್ಥಿಯಾಗಿ ನಾನು ಈ ಪರಂಪರೆಯನ್ನು- ಯಾವುದೇ ಭಾಷೆಯಲ್ಲಿರಲಿ- ಮನಸಾ ಗೌರವಿಸುತ್ತೇನೆ. ವ್ಯಾಕರಣ ಓದುವವನಿಗೆ ಮೀಮಾಂಸಾ ಶಾಸ್ತ್ರ, ನ್ಯಾಯ ಶಾಸ್ತ್ರಗಳು ಪೂರ್ವಪಕ್ಷಗಳಾಗಿ ಪ್ರಶ್ನೆ ಎತ್ತುತ್ತವೆ. ಪ್ರಶ್ನೆಯ ಒಂದಂಗುಲವನ್ನೂ ಬಿಡದೆ ಸಂಶಯಕ್ಕೆಡೆಯಿರದಂತೆ ಉತ್ತರಿಸುವ, ಅದೇ ಬಗೆಯಲ್ಲಿ ಪ್ರಶ್ನೆ ಕೇಳುವ ಪರಂಪರೆ ಇಂದಿಗೂ ನಮ್ಮಲ್ಲಿದೆ. ಇವತ್ತು ನಡೆದಿದ್ದು ಶಾಸ್ತ್ರಗಳ ಚರ್ಚೆಯಲ್ಲದಿರಬಹುದು, ಆದರೆ ಚರ್ಚೆಯೊಂದು ನಡೆಯಬೇಕಾದ ರೀತಿ ಅದೇ ತಾನೆ? ಏತಿ ಎಂದುದಕ್ಕೆ ಪ್ರೇತಿ ಎನ್ನುವುದೇ ಆದರೆ ಅದಕ್ಕೆ ಸಾಹಿತಿಗಳು ಯಾಕೆ? ಇನ್ನೊಬ್ಬನಿಗೆ ಉತ್ತರಿಸುವಾಗ, ಒಬ್ಬನನ್ನು ಸಮರ್ಥಿಸುವಾಗ ಅದರ ಕಾರಣವನ್ನು ಪ್ರತಿವಾದಿಯ ಸಂಶಯ ಕರಗುವಂತೆ ಮಂಡಿಸಬೇಕು. ಸಂಬಂಧವೇ ಇಲ್ಲದ ವಾಕ್ಯಗಳ ಸಂತೆಯು ಚರ್ಚೆಯಲ್ಲ ತಾನೆ?

ಇವತ್ತು ಸಿಟ್ಟಿಲ್ಲ, ನಾನು ಅಭಿಮಾನಿಸುವ ಚಿಂತನೆಯೊಂದನ್ನು ಪ್ರತಿಪಾದಿಸುವ ಹುಮ್ಮಸ್ಸಿಲ್ಲ. ಕನ್ನಡದ ದುಃಸ್ಥಿತಿಯ ಕುರಿತು ಖೇದವಿದೆ, ಇಷ್ಟು ಪೂರಾ ನಮ್ಮ ಸಾಹಿತಿಗಳು ತರ್ಕಸಿಂಧುವಲ್ಲದ ಮಾತಾಡುವ ಜನಗಳಾಗಿದ್ದಾರಲ್ಲ ಅಂತ ನೋವಿದೆ. ತನ್ನನ್ನು ತಾನು ಮಾರಿಕೊಂಡ ಮನುಷ್ಯ ತನ್ನ ಬದ್ಧತೆಯನ್ನು ಚಿಂತನೆಗೆ ಒಪ್ಪಿಸುವ ಬದಲು, ಇನ್ಯಾರದೋ ಎಂಜಲಿಗೆ, ಮುಲಾಜಿಗೆ ಒಪ್ಪಿಸಿಬಿಡುತ್ತಾನಲ್ಲ- ಒಬ್ಬ ಪಿಂಪ್ ನಂತೆ- ಎಂದೆನ್ನಿಸಿ ತೀರಾ ಸಪ್ಪೆಯೆನಿಸಿತು.
ಇವತ್ತು ಸಮಾಜದಲ್ಲಿ ಹರಿಕಥೆ ದಾಸರ ಕಥೆಗಳನ್ನು ಕೇಳಿಕೊಂಡವರು, ಯಕ್ಷಗಾನ ತಾಳಮದ್ದಲೆಯನ್ನು ಆಲಿಸುವ ಅತಿ ಸಾಮಾನ್ಯ ಜನರು, ಹಳೆ ಲೈಬ್ರೆರಿಯಲ್ಲಿ ಕಾಲ ಕಳೆಯುವವರು, ಒಂದು ಚರ್ಚೆಯ ರೀತಿ ಹೇಗಿರಬೇಕೆಂಬುದನ್ನು ಬಲ್ಲರು. ಅದೇ, ಅಧ್ಯಯನ ಇರುವ, ಸಾಹಿತಿಗಳೆನಿಸಿಕೊಂಡವರು ಅವರಿಗಿಂತ ಕಳಪೆಯಾಗಿದ್ದಾರೆ. ಇದು ಪಂಥದ ಪ್ರಶ್ನೆಯಲ್ಲ, ಯಾವುದೇ ಚಿಂತನೆಗೂ ಸಲ್ಲುವ ಸಾಮಾನ್ಯ ನಿಯಮದ ಪ್ರಶ್ನೆ. ಸಮಾಜದ ಅತಿ ಸಾಮಾನ್ಯ ವರ್ಗ ಇವತ್ತು ಕನ್ನಡದ ಸಾಹಿತಿಗಳ ಬಗ್ಗೆ ಮಾತಾಡುತ್ತದೆ ಯಾಕೆ ಎನ್ನುವುದಕ್ಕೆ ಬಹುಶಃ ಈ ಸಾಹಿತಿಗಳ ನೆಲೆ ತಪ್ಪಿದ ವರಸೆಯೇ ಕಾರಣವಿರಬಹುದು,

ಮಾತಾಡುವುದನ್ನು ಪರಿಗಣಿಸಿದೆ ಸಾಹಿತ್ಯಕ್ಕೆ ಕೊಟ್ಟ ಪುರಸ್ಕಾರ ಅಂದರು ಮಾಲಗತ್ತಿ, ಮಾತಿಗೆ ಮತ್ತು ಕೃತಿಗೆ ಸಂಬಂಧ ಇಲ್ಲವೇ ಎನ್ನುವ ಪ್ರಶ್ನೆಗೆ ಲಲಿತಾ ನಾಯಕ್ ಅಂದರು ’ಭಗವಾನ್ ಬರೆದಿದ್ದನ್ನೇ ಆಡುತ್ತಿದ್ದಾರೆ’ ಅಂತ. ಯೋಗೇಶ್ ಹೇಳ್ತಾರೆ ’ಕಲೆ ಮತ್ತು ಸಾಹಿತ್ಯವನ್ನೆಲ್ಲ ಧಾರ್ಮಿಕ ದೃಷ್ಟಿಯಲ್ಲಿ ನೋಡಬಾರದು’ ಅಂತ. ಸ್ವಾಮೀ ವಿಮರ್ಶೆಗೆ ಹೇಗೆ ತೆರೆದುಕೊಳ್ಳುವುದೆಂಬುದನ್ನು ನಮಗೆ ನೀವು ಪಾಠಮಾಡಬೇಕಿಲ್ಲ, ಬಂದಿರುವ ಪ್ರಶ್ನೆ ಆ ವಿಮರ್ಶೆಯನ್ನು ಭಗವಾನ್ ಎಂಥ ಭಾಷೆಯಲ್ಲಿ ಎದುರಿಗಿಟ್ಟ ಎಂಬುದು. ಅದಕ್ಕೆ ಉತ್ತರವನ್ನೇ ಕೊಡದೆ ಎಲ್ಲರೂ ನುಣುಚಿಕೊಂಡರು. ನಿಮ್ಮ ಹೀನಾಯ ಸೋಲು ಇದು, ಅಷ್ಟೆಲ್ಲ ಅಧ್ಯಯನ ಮಾಡಿಕೊಂಡವರಾಗಿದ್ದುಕೊಂಡು. ಮಾಸ್ತರ್ ಅಂತೂ ವರ್ತಮಾನದ ಪರಿವೆಯಿಲ್ಲದೇ ಮಾತಾಡಿದರು, ಭಗವಾನ್ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದೆಲ್ಲ ಆದೇಶಿಸಿದರು. ಕರೆದ ಚರ್ಚೆಗೆ ಬಾರದ, ಫೋನಿಗೆ ಉತ್ತರಿಸದ, ನೇರ ಚರ್ಚೆಯ ಆಹ್ವಾನವನ್ನು ಸ್ವೀಕರಿಸದ ವಿಚಾರಷಂಡ ಭಗವಾನನನ್ನು ಎಲ್ಲಿ ಸಂಧಿಸಿ ಉತ್ತರಕೊಡಬೇಕು, ಆದೇಶಿಸೋಣವಾಗಲಿ ಮಾಸ್ತರ್ರೆ.

ರೋಹಿತ್ ಚಕ್ರತೀರ್ಥ ಅದೆಷ್ಟು ನಿರ್ಲೇಪ ಮೂರ್ತಿಯಾಗಿ ಕುಳಿತಿದ್ದರೆಂದರೆ, ವಯೋವೃದ್ಧೆ ಲಲಿತಾ ನಾಯಕ್ ಸ್ವತಃ ತಮ್ಮ ಮಾತಿನ ಮಧ್ಯೆ ಉದ್ವೇಗಕ್ಕೆ ಒಳಗಾದರೂ, ಯುವ ರೋಹಿತ್ ಹಸನ್ಮುಖಿಯಾಗೇ ಇದ್ದರು. ಅರೆಬೆಂದವರೆಂದು ಇಂಥವರಿಗೆ ಹೇಳುವುದಾದರೆ ಅರೆಬೆಂದವರ ಅಗತ್ಯ ಕನ್ನಡಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಇದೆ.
ಭಗವಾನ್ ಗೆ ಸಂಸ್ಕೃತ ಗೊತ್ತು ಎಂದ ಲಲಿತಾ ನಾಯಕ್ ಆ ವಾಕ್ಯಗಳಲ್ಲಿಯೇ ತಮ್ಮ ಸಂಸ್ಕೃತ ಜ್ಞಾನವನ್ನು ತೆರೆದಿಟ್ಟರು! ಸಂಸ್ಕೃತವನ್ನು ಕೊಂಚ ಓದಿಕೊಂಡವರೂ ಅದನ್ನು ಗುರುತಿಸಬಹುದು. ಇರಲಿ ಅಜ್ಞಾನವು ತಪ್ಪಲ್ಲ, ಆದರೆ ಇನ್ನೊಬ್ಬನ ಅಜ್ಞಾನದ ಅಂಧ ಸಮರ್ಥನೆ ತಪ್ಪಾಗುತ್ತದೆ ನಾಯಕ್ ರೆ.         

ನಿಜವಾಗಿ ಬೌದ್ಧಿಕವಲಯ ಅಂತ ಯಾವುದನ್ನು ಭಾವಿಸಿದ್ದೆನೋ ಅದು ರಂಗು ಕಳೆದ ತಗಡಿನಂತಾಗಿದೆ. ಸಾಮಾನ್ಯ ಜನತೆಯ ಸಾಮಾನ್ಯ ಜ್ಞಾನದ ಬಗ್ಗೆ ಗೌರವ ಹೆಚ್ಚಾಗಿದೆ. ನಿಲುಮೆ ಎಂಬ ಅಪ್ಪಟ ಚಿಂತಕರ ಬಳಗದ ಬಗ್ಗೆ ಗೌರವ ನೂರ್ಮಡಿಯಾಗಿದೆ. ಇರಬಹುದು, ಉದ್ವೇಗಕ್ಕೆ ಒಳಗಾಗುವ ಯುವಕರಿರಬಹುದು ಇಲ್ಲಿಯೂ, ಆದರೆ ನಿಲುಮೆ ನಿಂತ ನೆಲೆಯಂತೂ ಶುದ್ಧ ಚಿಂತ್ರನೆಯದ್ದು. ಬಲಪಂಥದ್ದಲ್ಲ, ಕನ್ನಡದ ಪರಂಪರೆಯ ಆಶಾವಾದ ನಿಲುಮೆ ಇಂದಿಗೆ. ಉಗಿದೋಡುವ ಹೀನತೆ ಎಂದಿಗೂ ಈ ಜನಗಳಿಗೆ ಬಾರದಿರಲಿ.



Tuesday, September 15, 2015

ದೇವ್ಯಪರಾಧಕ್ಷಮಾಪಣಸ್ತೋತ್ರಮ್

ದೇವಿಯೊಳು ತಪ್ಪುಗಳ ಮನ್ನಿಸೆಂಬರಿಕೆ



ಶಂಕರ ಸ್ತೋತ್ರಗಳ ಕುರಿತು ಅದೇನೋ ಆಕರ್ಷಣೆ, ಒಲುಮೆ, ಎಂದಿಗೂ ನನ್ನಲ್ಲಿದೆ. ಅವುಗಳಲ್ಲೊಂದನ್ನು ಅನುವಾದ ಮಾಡುವವರೆಗೂ ಅನುವಾದವು ಈ ಪರಿಯ ಖುಷಿ ಕೊಡುವುದೆಂದು ತಿಳಿದಿರಲಿಲ್ಲ. ಈ ಅನುವಾದ ಒಂದು ರಸಪೂರ್ಣ ಅನುಭವ. ಶಂಕರರ ಶ್ಲೋಕಗಳ ಭಾವವನ್ನೆಲ್ಲ ಭಾಗಶಃ ಹಿಡಿದಿಡುವ ಪ್ರಯತ್ನವನ್ನು ಕನ್ನಡದ ನೆಲೆಯಲ್ಲಿ ಮಾಡಿದ್ದೇನೆ. ಈ ನಡುವೆ ಪ್ರೋತ್ಸಾಹಿಸಿದ, ಮೆಚ್ಚಿದ, ತಿದ್ದಿದ, ಮಾರ್ಗದರ್ಶನ ಮಾಡಿದ ಎಲ್ಲರಿಗೂ ಮನಸಾ ಕೃತಜ್ಞೆಗಳನ್ನರ್ಪಿಸುವೆ.

ಭಗವತಿಯ ಪದತಲಗಳಲ್ಲೂ, ಭಗವತ್ಪಾದರಡಿಗಳಲ್ಲೂ  ನಮನಪೂರ್ವಕ ಈ ಅನುವಾದಪುಷ್ಪದ ಅರ್ಪಣೆ.



ನ ಮಂತ್ರಂ ನೋ ಯಂತ್ರಂ ತದಪಿ  ಚ ನ ಜಾನೇ ಸ್ತುತಿಮಹೋ
ನ ಚಾಹ್ವಾನಂ ಧ್ಯಾನಂ ತದಪಿ ಚ ನ ಜಾನೇ ಸ್ತುತಿಕಥಾಃ |
ನ ಜಾನೇ ಮುದ್ರಾಸ್ತೇ ತದಪಿ ಚ ನ ಜಾನೇ ವಿಲಪನಮ್
ಪರಂ ಜಾನೇ ಮಾತಸ್ತ್ವದನುಸರಣಂ ಕ್ಲೇಶಹರಣಮ್ || 1 ||

ನಿನ್ನನೊಲಿಸುವ ಯಾವ ಪರಿಯೂ ತಿಳಿಯದಮ್ಮಾ ಮಂತ್ರವೂ
ಕರೆವುದೆಂತೋ ಸ್ಮರಣೆಯೆಂತೋ ಅರಿಯೆನಮ್ಮಾ ಕಥನವ
ಅತ್ತು ಕರೆಯುವ ಬಗೆಯನರಿಯೆನು ಮುದ್ದುಗರೆವುದನರಿಯೆನು
ನಿನ್ನ ಶರಣವದೆನ್ನ ಕೊರಗನು ಕಳೆವುದೆಂಬುದ ತಿಳಿವೆನು! 

ವಿಧೇರಜ್ಞಾನೇನ ದ್ರವಿಣವಿರಹೇಣಾಲಸತಯಾ
ವಿಧೇಯಾಶಕ್ಯತ್ತ್ವಾತ್ತವಚರಣಯೋರ್ಯಾ ಚ್ಯುತಿರಭೂತ್ |
ತದೇತತ್ ಕ್ಷಂತವ್ಯಂ ಜನನಿ ಸಕಲೋದ್ಧಾರಿಣಿ ಶಿವೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ || 2 ||


ಅಳವು ತಿಳಿವುಗಳಿಲ್ಲದೆನ್ನನು ನಿಯತಿಯಾಟದ ಶಿಶುವನು
ಬಾಗಲೊಲ್ಲದ ಹೆಮ್ಮೆಯವನನು ಚರಣಕೆರಗದ ತಪ್ಪನು
ಭರಿಸು ನಿನ್ನುಡಿಗುಡಿಯಲೆಲ್ಲವ ಜಗವನಾಲಂಗಿಸುವಳೆ
ಕೆಡುಕು ಕುಡಿಯಿರಬಲ್ಲುದಲ್ಲದೆ ದುರುಳೆಯವ್ವೆಯು ಇರುವಳೆ?

ಪೃಥಿವ್ಯಾಂ ಪುತ್ರಾಸ್ತೇ ಜನನಿ ಬಹವಸ್ಸಂತಿ ಸರಲಾಃ
ಪರಂ ತೇಷಾಂ ಮಧ್ಯೇ ವಿರಲತರಲೋಽಹಂ ತವ ಸುತಃ |
ಮದೀಯೋಽಯಂ ತ್ಯಾಗಃ ಸಮುಚಿತಮಿದಂ ನೋ ತವಶಿವೇ
ಕುಪುತ್ರೋ ಜಾಯೇತಕ್ವಚಿದಪಿ ಕುಮಾತಾ ನ ಭವತಿ || 3 ||

ತಿರೆಯೊಳಿರುವರು ತಾಯೆ ನಿನ್ನಯ ನೂರು ಮಕ್ಕಳು ಸರಳರು
ಈತ ನಿನ್ನಪರೂಪ ಕಂದನು ನೂರರೊಳಗಿನ್ನೊಬ್ಬನು
ನಿನಗೆ ಮೆಚ್ಚುಗೆಯೇನಿದಮ್ಮಾ ನನ್ನದೆಲ್ಲವ ತೊರೆದುದು
ಕೆಡುಕು ಕುಡಿಯಿರಬಲ್ಲುದಲ್ಲದೆ ಕೆಟ್ಟಮ್ಮನೆಂತದು ಇರುವಳು?

ಜಗನ್ಮಾತರ್ಮಾತಸ್ತವಚರಣಸೇವಾ ನ ರಚಿತಾ
ನ ವಾ ದತ್ತಂ ದೇವಿ ದ್ರವಿಣಮಪಿ ಭೂಯಸ್ತವ ಮಯಾ |
ತಥಾಽಪಿ ತ್ವಂ ಸ್ನೇಹಂ ಮಯಿ ನಿರುಪಮಂ ಯತ್ಪ್ರಕುರುಷೇ
ಕುಪುತ್ರೋ ಜಾಯೇತಕ್ವಚಿದಪಿ ಕುಮಾತಾ ನ ಭವತಿ || 4 ||

ಜಗದತಾಯೇ ನಿನ್ನ ಚರಣದ ಸೇವೆಮಾಡದಲುಳಿದೆನು
ರಾಶಿರಾಶಿಯ ಹಣವನೇನೂ ನಿನಗೆ ಕೊಡದವನೀತನು
ಆದರನುಪಮದೊಲುಮೆಯೂಡುವ ಧಾರೆಮನಸಿನ ಹೆಂಗಳೆ,
ಕೆಡುಕು ಕುಡಿಯಿರಬಲ್ಲುದಲ್ಲದೆ ದುರುಳೆಯವ್ವೆಯು ಇರುವಳೆ?

ಪರಿತ್ಯಕ್ತಾ ದೇವಾ ವಿವಿಧವಿಧಸೇವಾಕುಲತಯಾ 
ಮಯಾ ಪಂಚಾಶೀತೇರಧಿಕಮಪನೀತೇ ತು ವಯಸಿ
 |
ಇದಾನೀಂ ಚೇನ್ಮಾತಸ್ತವ ಯದಿ ಕೃಪಾ ನಾಪಿ ಭವಿತಾ
ನಿರಾಲಂಬೋ ಲಂಬೋದರಜನನಿ ಕಂ ಯಾಮಿ ಶರಣಮ್? || 5 ||

ನೂರುಸೇವೆಯ ಗೈಯಲಾಗದೆ ತೊರೆದೆ ದೇವತೆ ದೇವರ
ಕಳೆದು ಹೋಗಿದೆಯೈದು ಮತ್ತೆಂಭತ್ತು ವರುಷದ ಜೀವನ
ಈಗಲೊಂದೊಮ್ಮೆಯಿರದಿರೆ ನಿನ್ನ ಕರುಣೆಯು ನನ್ನಲಿ
ಯಾರಮೊರೆಹೊಗಲಮ್ಮ ನಾನಾಸರೆಯೆ ಕಾಣದ ತಾಣದಿ ?

ಶ್ವಪಾಕೋ ಜಲ್ಪಾಕೋ ಭವತಿ ಮಧುಪಾಕೋಪಮಗಿರಾ
ನಿರಾತಂಕೋ ರಂಕೋ ವಿಹರತಿ ಚಿರಂ ಕೋಟಿಕನಕೈಃ
 |
ತವಾಪರ್ಣೇ ಕರ್ಣೇ ವಿಶತಿ ಮನುವರ್ಣೇ ಫಲಮಿದಂ
 
ಜನಃ ಕೋ ಜಾನೀತೇ ಜನನಿ ಜಪನೀಯಂ ಜಪವಿಧೌ || 6 ||

ಹೇ! ಅಪರ್ಣೆಯೆ ನಿನ್ನ ಹೆಸರದು ಕಿವಿಯೊಳಿಳಿದರೆ ಫಲವಿದು
ನುಡಿಯಲರಿಯದನಹನು ಜೇನ್ನುಡಿಯವೋಲ್ ನುಡಿಮರುಳನು
ಕೋಟಿ ಹೊನ್ನುಗಳೊಡೆಯನಪ್ಪನು ಬಡವ ಹೆದರಿಕೆ ತೊರೆವನು
ಕ್ರಮದಿ ಜಪಿಸಲು ನಿನ್ನ ನಾಮವ ಫಲವನರಿತವನಾವನು?


ಚಿತಾಭಸ್ಮಾಲೇಪೋ ಗರಲಮಶನಂ ದಿಕ್ಪಟಧರೋ
ಜಟಾಧಾರೀ ಕಂಠೇ ಭುಜಗಪತಿಹಾರೀ ಪಶುಪತಿಃ |
ಕಪಾಲೀ ಭೂತೇಶೋ ಭಜತಿ ಜಗದೀಶೈಕಪದವೀಂ
ಭವಾನಿ ತ್ವತ್ಪಾಣಿಗ್ರಹಣಪರಿಪಾಟೀ ಫಲಮಿದಮ್ || 7 ||

ಚಿತೆಯ ಬೂದಿಯ ಬಳಿದುಕೊಂಬವ ನಂಜನುಂಗಿದ ನಗ್ನನು  
ಜಟೆಯ ಧರಿಸಿಹ ಕೊರಳಹಾರಕೆ ಹಾವತೊಟ್ಟವ ಪಶುಪತಿ
ಭೂತನಾಥನು ಬುರುಡೆಗೈಯವ ಜಗದಪತಿ ತಾನಾದುದು
ಭವನ ರಾಣಿಯೆ ನಿನ್ನ ಕರಗಳ ಹಿಡಿದ ಪುಣ್ಯದ ಫಲವದು! 

ನ ಮೋಕ್ಷಸ್ಯಾಕಾಂಕ್ಷಾ ಭವವಿಭವವಾಂಛಾಪಿ ಚ ನ ಮೇ
ನ ವಿಜ್ಞಾನಾಪೇಕ್ಷಾ ಶಶಿಮುಖಿ ಸುಖೇಚ್ಛಾಪಿ ನ ಪುನಃ |
ಅತಸ್ತ್ವಾಂ ಸಂಯಾಚೇ ಜನನಿ ಜನನಂ ಯಾತು ಮಮ ವೈ
ಮೃಡಾನೀ ರುದ್ರಾಣೀ ಶಿವಶಿವಭವಾನೀತಿ ಜಪತಃ || 8 ||

ಮುಕ್ತಿ ಬಯಕೆಯದಿಲ್ಲ ನನ್ನೊಳು ಜಗದಸಂಪದದಾಸೆಯೂ
ಅರಿವಿನೆಳಸಿಕೆಯಿಲ್ಲ ಶಶಿಮುಖಿ ಸೊಗದೊಳಿಲ್ಲೆನಗಾಸೆಯೂ
ನಿನ್ನ ಬೇಡುವುದೊಂದೆಯಮ್ಮಾ  ಜನುಮ ಕಳೆಯಲಿ ನನ್ನದು
ಮೃಡನಹೆಂಡತಿ ರುದ್ರನವಳೇ ಶಿವೆಯೆ ನಿನ್ನಯ ಜಪದಲಿ

ನಾರಾಧಿತಾಸಿ ವಿಧಿನಾ ವಿವಿಧೋಪಚಾರೈಃ
ಕಿಂ ರೂಕ್ಷ ಚಿಂತನಪರೈರ್ನ ಕೃತಂ ವಚೋಭಿಃ |
ಶ್ಯಾಮೇ ತ್ವಮೇವ ಯದಿ ಕಿಂಚನ ಮಯ್ಯನಾಥೇ
ಧತ್ಸೇ ಕೃಪಾಮುಚಿತಮಂಬ ಪರಂ ತವೈವ || 9 ||

ಉಪಚಾರಪೂಜೆಯಿಂದೊಲಿಸಿಲ್ಲವಮ್ಮಾ
ಶುಷ್ಕವಾದಗಳಿಂದ ಗೈದಿಲ್ಲದೇನಿದೆ ?
ನನ್ನೊಳಿನ್ನೂ ಕರುಣಿಯಾಗಿರುವಿಯಲ್ಲಾ
ನಿನ್ನೊಬ್ಬಳಿಂದಹುದು ಹೇ ಸಿರಿಮೇಘವರ್ಣೆ!

ಆಪತ್ಸುಮಗ್ನಃ ಸ್ಮರಣಂ ತ್ವದೀಯಂ
ಕರೋಮಿ ದುರ್ಗೇ ಕರುಣಾರ್ಣವೇಶಿ |
ನೈತಚ್ಛಠತ್ವಂ ಮಮ ಭಾವಯೇಥಾಃ
ಕ್ಷುಧಾತೃಷಾರ್ತಾ ಜನನೀಂ ಸ್ಮರಂತಿ || 10 ||

ಸಂಕಟದಿ ನಾ ಮುಳುಗಿ ನೆನೆಯುವೆನು ತಾಯೇ
ಪಡೆಯಲಸದಳ ಹೆಣ್ಣೆ ಕರುಣೆ ಕಡಲೊಡತಿ |
ಸಟೆಯೆಂದು ಬಗೆಯದಿರು ನನ್ನದೀ ಮೊರೆಯ
ಅವ್ವಗರೆಯುವರೆಲ್ಲ ಹಸಿದು ನೀರಡಿಸಿ ||

ಜಗದಂಬ ವಿಚಿತ್ರಮತ್ರ ಕಿಂ
ಪರಿಪೂರ್ಣಾ ಕರುಣಾಸ್ತಿ ಚೇನ್ಮಯಿ |
ಅಪರಾಧ ಪರಂಪರಾವೃತಂ
ನ ಹಿ ಮಾತಾ ಸಮುಪೇಕ್ಷತೇ ಸುತಂ || 11 ||

ಜಗದವ್ವ ಬೆರಗದೇನಿಹುದಿಲ್ಲಿ
ತುಂಬಿರಲ್ ತಿಳಿಗರುಣೆ ನಿನಗೆ ನನ್ನಲ್ಲಿ
ಅಮ್ಮ ತೊರೆಯುವುದಿಲ್ಲವೆಂದೂ
ತಪ್ಪುಗಳ ಬಲೆಬಂಧಿ ತನ್ನ ಕಂದನನು.

ಮತ್ಸಮಃ ಪಾತಕೀ ನಾಸ್ತಿ ಪಾಪಘ್ನೀ ತ್ವತ್ಸಮಾ ನ ಹಿ
ಏವಂ ಜ್ಞಾತ್ವಾ ಮಹಾದೇವಿ ಯಥಾ ಯೋಗ್ಯಂ ತಥಾ ಕುರು || 12 ||

ನನ್ನ ಸಮನಾರಿಲ್ಲ ಕೇಡುಗೆಯ್ಮೆಗಳೊಡೆಯ
ಕೇಡು ತೊಡೆವವರಲ್ಲಿ ಸಮರಿಲ್ಲ ನಿನಗೆ.
ಇಂತು ಬಗೆದೆನಗೆ ನೀ ಸರಿಯಹುದ ಗೈ ತಾಯೆ
ಹಿರಿಯವ್ವ ಜಗದವ್ವ ಮೂಜಗದ ಬೆರಗೇ!